Wednesday, May 1, 2024
Homeವಿಶೇಷಮನರಂಜನೆರಮೇಶ್ ಬೇಗಾರ್ ನಿರ್ದೇಶನದ "ವೈಶಂಪಾಯನ ತೀರ" ಸಿನಿಮಾ ಜನವರಿ 6 ರಂದು ಬಿಡುಗಡೆ

ರಮೇಶ್ ಬೇಗಾರ್ ನಿರ್ದೇಶನದ “ವೈಶಂಪಾಯನ ತೀರ” ಸಿನಿಮಾ ಜನವರಿ 6 ರಂದು ಬಿಡುಗಡೆ

(ನ್ಯೂಸ್ ಮಲ್ನಾಡ್ ವರದಿ)ಶೃಂಗೇರಿ: ವೈಶಂಪಾಯನ ತೀರ ಸಿನಿಮಾವೂ ಇದೆ ಜನವರಿ 6 ರಂದು ಬಿಡುಗಡೆ ಆಗಲಿದ್ದು.
ಹೆಚ್ಚಿನದಾಗಿ ಮಲೆನಾಡಿನ ಬಹುಮುಖ ಪ್ರತಿಭೆಗಳು ಈ ಸಿನಿಮಾದಲ್ಲಿ ಪ್ರದರ್ಶನ ನೀಡಿದ್ದು ವಿಶೇಷವಾಗಿದೆ.

ಕಳೆದ 30 ವರ್ಷಗಳಿಂದ ಕ್ರಿಯಾಶೀಲವಾಗಿರುವ ಕಲಾತಂಡವೊಂದು ಒಂದೊಂದೇ ಸಾಧನೆ ಮಾಡುತ್ತಾ ಇದೀಗ ಹಲವಾರು ಮೆಟ್ಟಿಲುಗಳನ್ನು ಏರಿ. ಇದೀಗ ಪೂರ್ಣಪ್ರಮಾಣದ ಚಲನಚಿತ್ರದೊಂದಿಗೆ ಹೊಸ ಶಿಖರವನ್ನು ಏರಿದೆ. ವೈಶಂಪಾಯನ ತೀರ ಸಿನಿಮಾವನ್ನು ಶೃಂಗೇರಿಯ ರಂಗಭೂಮಿ ಕಲಾವಿದರೆ ಮಾಡಿದ್ದು ವಿಶೇಷವಾಗಿದೆ.

ಮಲೆನಾಡು ಶೃಂಗೇರಿ ಪರಿಸದಲ್ಲಿ ನಡೆಯುವ ಕಾಲ್ಪನಿಕ ಕಥೆ ಇದಾಗಿದ್ದು. ವೈಕುಂಠಪುರ, ಸುಂಕುರ್ಡಿ, ತೆಕ್ಕೂರು ಮತ್ತು ಕಾಂಚೀನಗರದಲ್ಲಿ ಸಿನಿಮಾದ ಚಿತ್ರಿಕರಣವನ್ನು ಮಾಡಲಾಗಿದೆ.

ಸ್ವರಸಂಗಮ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಆರ್ ಸುರೇಶ್ ಬಾಬು ಈ ಸಿನಿಮಾವನ್ನು ನಿರ್ದೇಶಿಸಲಾಗಿದ್ದು. ಬೇಗಾರ್ ತಂಡದ ಎಲ್ಲಾ ರಂಗಭೂಮಿ ಕಲಾವಿದರು ವಿವಿಧ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಸಂಕಲನ ಹಾಗೂ ಎಡಿಟ್ ಶೃಂಗೇರಿಯವರು ಮಾಡಿರುವುದು ವಿಶೇಷವಾಗಿದೆ.

ಸುದ್ದಿಗೋಷ್ಠಿಯಲ್ಲಿ ಬಿ.ಎಲ್ ರವಿಕುಮಾರ್ ಮಾತನಾಡಿ ಮಲೆನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವೈಶಂಪಾಯನ ತೀರ ಸಿನಿಮಾವನ್ನು ಚಿತ್ರೀಕರಣ ಮಾಡಿದ್ದು ವಿಶೇಷವಾಗಿದೆ ಎಂದರು.
ಶೃಂಗೇರಿ ಕಲಾ ತಂಡದಿಂದ ಮೊದಲ ಬಾರಿಗೆ ಈ ಸಿನಿಮಾವನ್ನು ಉಲ್ಲೇಖ ಮಾಡಲಾಗಿದೆ ಎಂದರು.

ನಯನ ರವರು ಮಾತನಾಡಿ ವೈಶಂಪಾಯನ ತೀರ ಸಿನಿಮಾವೂ ಹಳ್ಳಿಯ ಜೀವನ ಶೈಲಿಗೆ ಹೊಂದಿರುವ ಸಿನಿಮಾವಾಗಿದೆ. ಈ ಚಲನಚಿತ್ರದಲ್ಲಿ ರಮೇಶ್ ಬೇಗಾರ್ ಪ್ರಥಮ ಹೆಜ್ಜೆ ಇಟ್ಟಿದ್ದಾರೆ. ಹಾಗೂ ವೈಶಂಪಾಯನ ತೀರ ಸಿನಿಮಾವೂ ಕಾಂತರ ಚಿತ್ರಕ್ಕೆ ಹೋಲುವ ಇನ್ನೊಂದು ಸಿನಿಮಾವಾಗಿದೆ ಎಂದರು.
ನಾಗೇಶ್ ಕಾಮತ್, ಶಿಶಿರ ಸೇರಿದಂತೆ ಇತರರು ಇದ್ದರು.

Most Popular

Recent Comments