Tuesday, November 28, 2023
HomeUncategorizedಶ್ರೀಚಿಂತಾಮಣಿಗೃಹಪ್ರವೇಶೋತ್ಸವ; ಶ್ರೀಸಹಸ್ರನಾಲಿಕೇರಮಹಾಗಣಯಾಗ, ಅತಿರುದ್ರಮಹಾಯಾಗ-ಶ್ರೀಸಹಸ್ರಚಂಡೀಮಹಾಯಾಗ ಮಹಾಸಮಾರಂಭ

ಶ್ರೀಚಿಂತಾಮಣಿಗೃಹಪ್ರವೇಶೋತ್ಸವ; ಶ್ರೀಸಹಸ್ರನಾಲಿಕೇರಮಹಾಗಣಯಾಗ, ಅತಿರುದ್ರಮಹಾಯಾಗ-ಶ್ರೀಸಹಸ್ರಚಂಡೀಮಹಾಯಾಗ ಮಹಾಸಮಾರಂಭ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಭಕ್ತ ಚಿಂತಾಮಣಿಯಾದ ಶ್ರೀವಿದ್ಯಾಂಬಿಕಾ ಶ್ರಿ ರಾಜರಾಜೇಶ್ವರೀದೇವೀ ಶ್ರೀಮಾತೆಯ ಸಾಕ್ಷಾತ್ಕಾರಕ್ಕೆ ಸಾಧನವಾದ ಶ್ರೀವಿದ್ಯೋಪಾಸನಾ ತಪೋನುಷ್ಠಾನವನ್ನು ಶ್ರೀಶ್ರೀಜಗದ್ಗುರು ಆಚಾರ್ಯಮಹಾಸ್ವಾಮಿಗಳು ನಿರಂತರ ನಿರಂತರಾಯ ಅನುಷ್ಠಿಸಲು ಅನುಕೂಲಗಳು ಇರುವಂತೆ “ಶ್ರೀಚಿಂತಾಮಣಿ ಗೃಹವನ್ನು ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್. ಶ್ರೀವಿದ್ಯಾಪೀಠಮ್, ಶ್ರೀಕ್ಷೇತ್ರ ಶಕಟಪುರಮ್. ಕೊಪ್ಪ ತಾಲೂಕಿನಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

ಶ್ರೀ ಶ್ರೀಜಗದ್ಗುರು ಮಹಾಸ್ವಾಮಿಗಳು ಕೈಗೊಳ್ಳುವ ಶ್ರೀವಿದ್ಯಾ, ಶ್ರೀಚಂದ್ರಮೌಲೀಶ್ವರ, ಶ್ರೀವಿದ್ಯಾವಿಶ್ವೇಶ್ವರದೇವರ ಪೂಜಾದರ್ಶನವನ್ನು ಮಾಡಲು ಭಕ್ತರಿಗೆ ಸೌಕರ್ಯವಿರುವಂತೆ “ಶ್ರೀಸಭಾವನ್ನು ಸಜ್ಜುಗೊಳಿಸಲಾಗಿದೆ. ಇದೇ ಶ್ರೀಶೋಭನ ಸಂಮತ್ಸರದ ಜ್ಯೇಷ್ಠ ಶುದ್ಧ ದ್ವಾದಶೀ ಗುರುವಾರ ದಿನಾಂಕ 1-06-2023 ರಂದು ಪ್ರಾತಃ 08:00ಕ್ಕೆ ಸಲ್ಲುವ ಮಿಥುನಲಗ್ನದ ಮೀನಾಂಶದಲ್ಲಿ ಈ “ಶ್ರೀಚಿಂತಾಮಣಿಗೃಹ”ದ ಮತ್ತು “ಶ್ರೀಸಭಾ”ದ ಶುಭಪ್ರವೇಶೋತ್ಸವವು ನಡೆಯಲಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಈ ಶುಭ ಮಹೋತ್ಸವಸಮಯದಲ್ಲಿ ಸಹಸ್ರನಾಲಿಕೇರಮಹಾಗಣಯಾಗವೂ ಮತ್ತು ಅತಿರುದ್ರಮಹಾಯಾಗ-ಶ್ರೀಸಹಸ್ರಚಂಡೀಮಹಾಯಾಗಗಳೂ ನೆರವೇರಲಿವೆ. ಶ್ರೀವಿದ್ಯಾಪೀಠದ ಎಲ್ಲ ಶಿಷ್ಯ-ಭಕ್ತಾಭಿಮಾನಿಗಳು ಈ ಮಂಗಲಮಹೋತ್ಸವದಲ್ಲಿ ಬಂಧು-ಮಿತ್ರ ಪರಿವಾರ ಸಹಿತ ಭಾಗವಹಿಸಿ ಶ್ರೀವಿದ್ಯಾ-ಶ್ರೀಗುರುದೇವ ತಾನುಗ್ರಹಕ್ಕೆ ಪಾತ್ರರಾಗ ಬೇಕೆಂದು ಕೋರಿದ್ದಾರೆ.

ಶ್ರೀಚಿಂತಾಮಣಿಗೃಹಪ್ರವೇಶ ಶುಭಾರಂಭದ ಕಾರ್ಯಕ್ರಮದ ವಿವರ:
* 22-05-2023 ರ ಸೋಮವಾರ ಶ್ರೀಗುರು-ಶ್ರೀಗಣೇಶಪ್ರಾರ್ಥನೆ, ಪುಣ್ಯಾಹ, ಸಹಸ್ರಮೋದಕ ಶ್ರೀಮಹಾಗಣಪತಿಹೋಮ, ಸಾಯಂ :- ಶ್ರೀಮಹಾಗಣಪತಿಮಂತ್ರಜಪ, ಅಗ್ನಿಜನನ.
* 23-05-2023 ಮಂಗಳವಾರ ಶ್ರೀಸಹಸ್ರನಾಲಿಕೇರಮಹಾಗಣಯಾಗ, ಮಧ್ಯಾಹ್ನ 12:00ಕ್ಕೆ ಪೂರ್ಣಾಹುತಿ
* 24-05-2023 ಬುಧವಾರ ಪ್ರಾತಃ 08:00ಕ್ಕೆ : ಅತಿರುದ್ರಮಹಾಯಾಗಸಂಕಲ್ಪ ಹಾಗೂ ಶ್ರೀರುದ್ರಪುರಶ್ಚರಣೆ.
* 25-05-2023 ಗುರುವಾರದಿಂದ 28-05-2023 ಭಾನುವಾರದವರೆಗೆ ಪ್ರತಿದಿನ ಪ್ರಾತಃ ಸಾಯಂ ಶ್ರೀರುದ್ರಪುರಶ್ಚರಣೆ.
* 29-05-2023 ಸೋಮವಾರ 12:00ಕ್ಕೆ ಶ್ರೀಶ್ರೀಜಗದ್ಗುರು ಆಚಾರ್ಯಮಹಾಸ್ವಾಮಿಗಳವರ ದಿವ್ಯಸಾನ್ನಧ್ಯದಲ್ಲಿ ಅತಿರುದ್ರಮಹಾಯಾಗದ ಪೂರ್ಣಾಹುತಿ.
* ದಿನಾಂಕ 30-05-2023ರ ಮಂಗಳವಾರ ಶ್ರೀವಿದ್ಯಾಂಬಿಕಾಶ್ರೀರಾಜರಾಜೇಶ್ವರೀದೇವೀಶ್ರೀಮಾತೆಯ ಸನ್ನಿಧಿಯಲ್ಲಿ ಲಕ್ಷಾರ್ಚನೆ, ಜಪ, ಮಹಾಮಂಗಲಾರತಿ ಇತ್ಯಾದಿ.
* 31-05-2023 ಬುಧವಾರ ಪ್ರಾತಃ 08:00ಕ್ಕೆ ಶ್ರೀಸಹಸ್ರಚಂಡಿಕಾಯಾಗದ ಮಹಾಸಂಕಲ್ಪ, ಸಹಸ್ರಚಂಡೀಪುರಶ್ಚರಣೆ ಪ್ರಾರಂಭ. ರಾತ್ರಿ ವಾಸ್ತು-ರಾಕ್ಷಿಘ್ನಹೋಮ.
* 01-06-2023 ಗುರುವಾರ ಪ್ರಾತಃ 08:00ಕ್ಕೆ ಸಲ್ಲುವ ಮಿಥುನಲಗ್ನದ ಮೀನಾಂಶದಲ್ಲಿ ಚಿಂತಾಮಣಿ-ಶ್ರೀಸಭಾಗೃಹಪ್ರವೇಶೋತ್ಸವ.
* 01-06-2023 ರಿಂದ 03-06-2023ರವರೆಗೆ ಸಹಸ್ರಚಂಡೀಪುರಶ್ಚರಣೆ. ಸಾಯಂಕಾಲ ನವಾಕ್ಷರೀಮಂತ್ರಜಪ, ಶ್ರೀಲಲಿತಾಸಹಸ್ರನಾಮಪಾರಾಯಣ.
* 04-06-2023 ಭಾನುವಾರ ಶ್ರೀಸಹಸ್ರಚಂಡೀಮಹಾಯಾಗ, ಮಧ್ಯಾಹ್ನ 12:00ಕ್ಕೆ ಶ್ರೀಶ್ರೀಜಗದ್ಗುರು ಆಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಶ್ರೀಸಹಸ್ರಚಂಡಿಕಾಯಾಗದ ಪೂರ್ಣಾಹುತಿ, ಅನುಗ್ರಹಭಾಷಣ, ಋತ್ವಿಕ್ಸಂಭಾವನೆ, ಅನ್ನಸಂತರ್ಪಣೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಆಸ್ಪತ್ರೆ, ಶಾಲೆ, ಊರುಗಳಿರುವ ಡೀಮ್ಡ್ ಅರಣ್ಯ ಭೂಮಿಗೆ ಬದಲಿ ಜಾಗ ನೀಡಲು ಸಿದ್ಧ; ಜಿಲ್ಲಾಧಿಕಾರಿ ಕೆ ಎನ್ ರಮೇಶ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಮತ್ತು ಅಮೃತ್ ಮಹಲ್ ಜಾಗಗಳಲ್ಲಿ ಆಸ್ಪತ್ರೆ, ಶಾಲೆ, ಊರುಗಳೂ ಇವೆ. ಸರ್ಕಾರ ಒಪ್ಪುವುದಾದರೆ ಅದಕ್ಕೆ ಬದಲಿ ಜಾಗವನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಇದಕ್ಕಾಗಿ ಭೂಮಿಯನ್ನು ಗುರುತು ಮಾಡಿಟ್ಟುಕೊಂಡಿದ್ದೇವೆ. ಜನ ವಸತಿ ಪ್ರದೇಶಗಳಿರುವ ಡೀಮ್ಡ್ ಮತ್ತು ಅಮೃತ್ ಮಹಲ್ ಭೂಮಿಯ ಎರಡು ಪಟ್ಟು ಪ್ರಮಾಣದಷ್ಟು ಭೂಮಿಯನ್ನು ನಾವು ನೀಡಲು ತಯಾರಿದ್ದೇವೆ. ಇದಕ್ಕೆ ಬೇಕಿದ್ದರೆ ನಾವು ಪ್ರಸ್ತಾ ವನೆ ಕಳಿಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಡೀಮ್ಡ್ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರೂ ನೋಟಿಫಿಕೇಷನ್ ಮಾತ್ರ ಆಗಿದೆ. ಕಾಯ್ದೆ ಆಗಿಲ್ಲ. ನಮ್ಮ ಜಿಲ್ಲೆಯಲ್ಲಿ ೧.೪೧ ಲಕ್ಷ ಹೆಕ್ಟರ್ ಡೀಮ್ಡ್ ಫಾರೆಸ್ಟ್ ಎಂದು ಗುರಿತಿಸಲಾಗಿತ್ತು. ಇದೀಗ ಸರ್ಕಾರ ಅದನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ ನಂತರ ಅದರ ಪ್ರಮಾಣ ೫೧೯೦೦ ಹೆಕ್ಟರ್‌ಗೆ ಇಳಿದಿದೆ ಎಂದರು.

ಈಗ ಕೈಬಿಟ್ಟಿರುವ ಡೀಮ್ಡ್ ಜಮೀನನ್ನು ಅರಣ್ಯ ಇಲಾಖೆಯಿಂದ ಹಿಂದಕ್ಕೆ ಪಡೆಯಲು ಆ ಜಾಗವನ್ನು ಅವರಿಗೆ ಕೊಟ್ಟೇ ಇರಲಿಲ್ಲ. ಡೀಮ್ಡ್ ಎಂದು ಘೋಷಣೆ ಆಷ್ಟೇ ಆಗಿತ್ತು. ಈ ಕಾರಣಕ್ಕೆ ಗೊಂದಲ ಇತ್ತು. ಯಾವುದೇ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ತಕರಾರರು ಇದ್ದು, ಕಡತವನ್ನು ಅರಣ್ಯ ಇಲಾಖೆಗೆ ಕಳಿಸಿದಾಗ ಮಾತ್ರ ಡೀಮ್ಡ್ ಸಮಸ್ಯೆಯೂ ಅಡ್ಡ ಬರುತ್ತಿತ್ತು ಎಂದು ವಿವರಿಸಿದರು.

ಇದಲ್ಲದೆ ಮೀಸಲು ಅರಣ್ಯ ಎಂದು ಈ ಹಿಂದೆಯೇ ತೀರ್ಮಾನ ಆಗಿರುವ ಸಾಕಷ್ಟು ಜಮೀನು ಪಹಣಿಯಲ್ಲಿ ಇನ್ನೂ ಅರಣ್ಯ ಎಂದು ಬರುವುದಿಲ್ಲ. ಇಂತಹ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಂತಿಮ ಹಂತದಲ್ಲಿ ಈ ಜಾಗ ನಮ್ಮದು ಎಂದು ಹೇಳುವಾಗ ಮತ್ತೆ ಗೊಂದಲಕ್ಕೆ ಕಾರಣವಾಗುತ್ತಿದೆ. ಈ ಕಾರಣಕ್ಕೆ ಅರಣ್ಯದ ಗಡಿ ಗುರುತಿಸಿ ಪ್ರತ್ಯೇಕಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಮತ್ತೊಂದು ದುರ್ಘಟನೆ; ಒಂದೇ ಕುಟುಂಬದ ಮೂವರು ಸಾವು

ಜಿಲ್ಲೆಯಲ್ಲಿ ವಿವಿಧ ಯೋಜನೆ ಯಡಿ ಫಲಾನುಭವಿಗಳಿಗೆ ಮಂಜೂರಾದ ಜಮೀನಿಗೆ ಸಂಬಂಧಿಸಿದ ದಾಖಲೆಗ ಳನ್ನು ಜೆರಾಕ್ಸ್ ಹಾಗೂ ಸ್ಕ್ಯಾನ್ ಮಾಡಿಸಿ ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿಗಳಲ್ಲಿ ಇಡಲು ಕ್ರಮ ವಹಿಸಲಾಗಿದೆ. ಮುಂದೆ ಯಾರೂ ತಮ್ಮ ಕಡತ ನಾಪತ್ತೆಯಾಗಿದೆ ಎನ್ನುವ ದೂರು ಬರಬಾರದು. ಎಸಿ ಕಚೇರಿಯಲ್ಲಿ ಸಿಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಂತೂ ಸಿಗಲೇ ಬೇಕು. ಈ ಕೆಲಸ ಶೇ.೮೦ ರಷ್ಟು ಆಗಿದೆ. ಮಿಕ್ಕ ಶೇ. ೨೦ ರಷ್ಟನ್ನು ಸಧ್ಯದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಭೂಮಿ ಆರ್‌ಟಿಸಿ ಇಲಾಖಗೆ ಪತ್ರ ಬರೆದು ನಮ್ಮ ಜಿಲ್ಲೆಯಲ್ಲಿ ಆಶ್ರಯ ಯೋಜನೆಗೆ ಕೊಟ್ಟಿರುವ ಎಲ್ಲಾ ಸರ್ವೇ ನಂಬರ್ ಪಟ್ಟಿಯನ್ನು ತರಿಸಿಕೊಂಡಿದ್ದೇವೆ. ಇಲ್ಲಿಯವರೆಗೆ ಯಾರೂ ಈ ಕಾರ್ಯ ಮಾಡಿರಲಿಲ್ಲ. ಪಡಿಓ, ತಹಸೀಲ್ದಾರರಿಗೆ ಗೊತ್ತಿಲ್ಲದ ಮಾಹಿತಿ ಈಗ ನಮ್ಮ ಬಳಿ ಇದೆ ಎಂದರು.

ಈ ಎಲ್ಲಾ ಜಾಗವನ್ನು ಸರ್ವೇ ಮಾಡಿಸಿ ಭೂಮಿಯನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯ ಹಿಡಿ ಯುತ್ತದೆ ಎಂದು ತಿಳಿಸಿದರು. ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ ಸಂಬಂಧ ನಾವು ಬಂದ ಮೇಲೆ ೭ ಮಂದಿ ರೆವೆನ್ಯೂ ಇನ್ಸ್‌ಪೆಕ್ಟರ್ ಗಳನ್ನು ನಾವು ಜೈಲಿಗೆ ಕಳಿಸಿದ್ದೇವೆ. ಈ ಪೈಕಿ ಒಬ್ಬಾತನಿಗೆ ಇನ್ನೂ ಬಿಡುಗಡೆ ಆಗಿಲ್ಲ. ಹಿಂದೆ ಯಾರೂ ಈ ಕ್ರಮ ಕೈಗೊಂಡಿಲ್ಲ ಎಂದರು.

ಸುದ್ದಿ ಕೃಪೆ: ನ್ಯೂಸ್ ಕನ್ನಡ

Most Popular

Recent Comments