Turmeric Water: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಡುಗೆ ಮನೆಯ ಸಾಮ್ರಾಜ್ಯದಲ್ಲಿ ಅರಿಶಿನವನ್ನು ಚಿನ್ನದ ಬಣ್ಣದ ಮಸಾಲೆ ಪದಾರ್ಥ ಎಂದು ಹೆಮ್ಮೆಯಿಂದ ಗುರುತಿಸಲಾಗುತ್ತದೆ. ಏಕೆಂದರೆ ಇದನ್ನು ಹಾಕಿ ತಯಾರು ಮಾಡುವ ಯಾವುದೇ ಅಡುಗೆ ತನ್ನ ಬಣ್ಣವನ್ನು ಹಳದಿ ಬಣ್ಣಕ್ಕೆ ಬದಲಿಸಿಕೊಳ್ಳುತ್ತದೆ. ವಿಶೇಷವಾಗಿ ನಮ್ಮ ಭಾರತದಲ್ಲಿ ಹಾಗೂ ದಕ್ಷಿಣ ಏಷಿಯಾದಲ್ಲಿ ಅರಿಶಿನವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಇಡೀ ಪ್ರಪಂಚದ ತುಂಬಾ ಇದನ್ನು ಉಪಯೋಗಿಸುತ್ತಾರೆ.- ಗೃಹ ಜ್ಯೋತಿ
ಇದನ್ನೂ ಓದಿ; ಮೂಡಿಗೆರೆ: ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ
ಮನುಷ್ಯನ ದೇಹಕ್ಕೆ ಸ್ವಲ್ಪ ಉಷ್ಣ ಪ್ರಭಾವವನ್ನು ಕೊಡುವ ಅರಿಶಿನ ಶೀತ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವ ಗುಣ ಪಡೆದಿದೆ. ಅಡುಗೆಯಲ್ಲಿ ಸ್ವಲ್ಪ ಕಹಿಯಾದ ರುಚಿ ಕೊಟ್ಟರೂ ಕೂಡ ಆರೋಗ್ಯದ ವಿಷಯದಲ್ಲಿ ಇದನ್ನು ಮೀರಿಸುವವರು ಯಾರೂ ಇಲ್ಲ. ಹಾಗಾಗಿಯೇ ಬಹಳ ಹಿಂದಿನ ಕಾಲದಿಂದ ಆಯುರ್ವೇದ ಪದ್ಧತಿಯಲ್ಲಿ ಅರಿಶಿನವನ್ನು ಔಷಧಿಗಳಲ್ಲಿ ಬಳಕೆಮಾಡಿ ಜನರ ಕಾಯಿಲೆಗಳನ್ನು ವಾಸಿ ಮಾಡಿ ಯಶಸ್ಸು ಕಂಡಿದ್ದಾರೆ.
ಹಾಗಾಗಿ ಈಗಲೂ ಕೂಡ ಯಾವುದೇ ರೋಗರುಜಿನಗಳು ಬರದಂತೆ ಯಾವುದೇ ಸೋಂಕು ನಮ್ಮನ್ನು ತಾಗದಂತೆ ನಮ್ಮ ದೇಹವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕು ಎಂದರೆ ಪ್ರತಿದಿನ ಅರಿಶಿನ ಮಿಶ್ರಿತ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಇದನ್ನೂ ಓದಿ; ಕಾಳುಮೆಣಸಿನ ರೇಟ್ ನಲ್ಲಿ ದಿಢೀರ್ ಜಿಗಿತ..!
ಹಾಗಾದರೆ ಅರಿಶಿನ ಮಿಶ್ರಿತ ನೀರನ್ನು (Turmeric Water:) ಕುಡಿಯುವುದರಿಂದ ಉಂಟಾಗುವ ಆರೋಗ್ಯದ ಪ್ರಯೋಜನಗಳು ಯಾವುದು?:
ನಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ:
ಅರಿಶಿನ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವ ಗುಣ ಲಕ್ಷಣವನ್ನು ಪಡೆದುಕೊಂಡಿದೆ. ಹೀಗಾಗಿ ನಮ್ಮ ಹೊಟ್ಟೆ ಭಾಗದಲ್ಲಿ ನಾವು ಸೇವನೆ ಮಾಡಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುವ ಜೀರ್ಣ ರಸಗಳ ಉತ್ಪತ್ತಿಯಲ್ಲಿ ಇದು ನೆರವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಆರೋಗ್ಯಕರವಾದ ಅಂಶಗಳನ್ನು ಒದಗಿಸಿ ಯಾವುದೇ ಜೀರ್ಣಾಂಗದ ಅಸ್ವಸ್ಥತೆಗಳನ್ನು ಇಲ್ಲವಾಗಿಸುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಒಂದು ಲೋಟ ಅರಿಶಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿ ತನ್ನ ಕೆಲಸ ನಿರ್ವಹಿಸುತ್ತದೆ.
ಅಲ್ಜಿಮರ್ ಕಾಯಿಲೆಯಿಂದ ದೂರವುಳಿಯಬಹುದು:
ವಯಸ್ಸಾದಂತೆ ಎದುರಾಗುವ ಮರೆವಿನ ಕಾಯಿಲೆ ಅಥವಾ ಅಲ್ಜಿಮರ್ ಕಾಯಿಲೆ ಮೆದುಳಿನ ಜೀವಕೋಶಗಳ ಹಾನಿಯಿಂದ ಉಂಟಾಗುತ್ತದೆ. ಇದು ಕ್ರಮೇಣವಾಗಿ ಬೇರೆ ರೂಪಕ್ಕೂ ಕೂಡ ತಿರುಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೀಟಾ ಅಮೈಲಾಯ್ಡ್ ಎನ್ನುವ ಅಂಶ ಅರಿಶಿನದಲ್ಲಿ ಅಡಗಿರುವುದರಿಂದ ಇದನ್ನು ನಮ್ಮ ದೇಹಕ್ಕೆ ನೀರಿನ ಮೂಲಕ ಸೇರಿಸುವುದರಿಂದ ತನ್ನ ಪ್ರೋಟೀನ್ ಪ್ರಭಾವದಿಂದ ಮೆದುಳಿನ ಜೀವ ಕೋಶಗಳು ಹಾಳಾಗದಂತೆ ನೋಡಿಕೊಂಡು ನಮ್ಮ ಬುದ್ಧಿ ಶಕ್ತಿಯನ್ನು ಮತ್ತು ಚುರುಕುತನವನ್ನು ದೀರ್ಘಕಾಲ ಕಾಪಾಡುತ್ತದೆ ಮತ್ತು ಮರೆವಿನ ಕಾಯಿಲೆಯಿಂದ ನಮ್ಮನ್ನು ದೂರ ಮಾಡುತ್ತದೆ.
ಇದನ್ನೂ ಓದಿ; ಉಚಿತ ವಿದ್ಯುತ್ ಪಡೆಯಲು ನೋಂದಣಿ ಕಡ್ಡಾಯ
ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುತ್ತವೆ:
ನೈಸರ್ಗಿಕವಾದ ಹಳದಿ ಬೆರೆಸಿದ ನೀರನ್ನು ಕುಡಿಯುವುದರಿಂದ ಹೃದಯದ ಮೇಲೆ ಜಾದು ಪ್ರಯೋಗವಾಗುತ್ತದೆ ಎಂದು ಹೇಳಬಹುದು. ಏಕೆಂದರೆ ಇದರ ನಂತರದಲ್ಲಿ ಕ್ರಮೇಣವಾಗಿ ನಮ್ಮ ಹೃದಯದ ಭಾಗದಿಂದ ಉಂಟಾಗುವ ರಕ್ತ ಸಂಚಾರದಲ್ಲಿ ಹಾಗೂ ರಕ್ತ ನಾಳಗಳಲ್ಲಿ ಯಾವುದೇ ಕೆಟ್ಟ ಕೊಲೆಸ್ಟ್ರಾಲ್ ಅಂಶ ಸೇರಿಕೊಳ್ಳದಂತೆ ನೋಡಿಕೊಂಡು ರಕ್ತ ನಾಳಗಳು ಬ್ಲಾಕ್ ಆಗದಂತೆ ತಡೆದು ದೇಹದ ರಕ್ತ ಸಂಚಾರ ವ್ಯವಸ್ಥೆಯನ್ನು ಸ್ವಚ್ಛವಾಗಿ ನೋಡಿಕೊಳ್ಳುತ್ತದೆ.
ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ:
ನೈಸರ್ಗಿಕವಾಗಿ ಅತ್ಯುತ್ತಮವಾದ ಮತ್ತು ಕೋಮಲವಾದ ತ್ವಚೆಯನ್ನು ಹೊಂದಬೇಕು ಎಂದು ಯಾರಾದರೂ ಆಸೆ ಪಟ್ಟರೆ ಮೊದಲು ತಮ್ಮ ದೇಹದ ರಕ್ತದ
ಶುದ್ಧೀಕರಣ ಮಾಡಿಕೊಳ್ಳಬೇಕು. ಅಂದರೆ ರಕ್ತ ಸಂಚಾರದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕಿದರೆ, ಚರ್ಮದ ಭಾಗಕ್ಕೆ ಪೂರೈಕೆಯಾಗುವ ರಕ್ತ ಆರೋಗ್ಯಕರವಾಗಿ ಕೂಡಿರುತ್ತದೆ. ಜೊತೆಗೆ ರಕ್ತದಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಅಂಶಗಳು ಫ್ರೀ ರಾಡಿಕಲ್ ಅಂಶಗಳ ಹಾವಳಿಯನ್ನು ತಡೆಯುತ್ತದೆ ಎಂದು ಹೇಳಬಹುದು.
ಹಾಗಾಗಿ ನೈಸರ್ಗಿಕವಾಗಿ ಮತ್ತು ಸ್ವಲ್ಪ ನಿಧಾನವಾಗಿ ಚರ್ಮ ಹೊಳಪಿನಿಂದ ಕೊಡುತ್ತದೆ ಜೊತೆಗೆ ಚರ್ಮದ ಮೇಲಿನ ಸುಕ್ಕುಗಳು ಮತ್ತು ಮೊಡವೆಗಳು ಮಾಯವಾಗಿ ವಯಸ್ಸಾಗುವಿಕೆ ಪ್ರಕ್ರಿಯೆ ದೂರವಾಗುತ್ತದೆ.
ದೇಹದ ಉರಿಯೂತ ಕಡಿಮೆಯಾಗುತ್ತದೆ:
ಅರಿಶಿನದಲ್ಲಿ ಕಂಡು ಬರುವ ನಿಸರ್ಗದತ್ತವಾದ anti-inflammatory ಗುಣ ಲಕ್ಷಣಗಳು ಆರ್ಥ್ರೈಟಿಸ್ ಸಮಸ್ಯೆಯನ್ನು ದೂರ ಮಾಡುತ್ತದೆ. ಹೀಗಾಗಿ ಮೂಳೆಗಳಿಗೆ ಸಂಬಂಧ ಪಟ್ಟ ನೋವು ಹಾಗೂ ಕೀಲು ನೋವು ಮಾಯವಾಗುತ್ತದೆ. ದೀರ್ಘ ಕಾಲದಿಂದ ಆರ್ಥ್ರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಕೇವಲ 15 ರಿಂದ 20 ದಿನಗಳಲ್ಲಿ ಮೈ ಕೈ ನೋವಿಗೆ ಹಾಗೂ ಮೂಳೆಗಳ ನೋವಿಗೆ ಶಾಶ್ವತ ಪರಿಹಾರ ಸಿಗುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ
- ಚಾರ್ಮಾಡಿ ಘಾಟಿಯಲ್ಲಿ ಪ್ರವಾಹ ಎಂದು ನಕಲಿ ವಿಡಿಯೋ ವೈರಲ್
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-25.07.2023
Turmeric Water: ದೇಹದ ತೂಕ ಕಡಿಮೆಯಾಗುತ್ತದೆ:
ಯಾರಿಗೆ ಈಗಾಗಲೇ ತಮ್ಮ ದೇಹದ ಸೊಂಟದ ಭಾಗದಲ್ಲಿ ಬೊಜ್ಜು ತುಂಬಿಕೊಂಡು ಅನಾರೋಗ್ಯವನ್ನು ಅನುಭವಿಸುತ್ತಿರುತ್ತಾರೆ ಮತ್ತು ದೇಹದ ತೂಕ ಅದಾಗಲೇ ವಿಪರೀತ ಹೆಚ್ಚಾಗಿರುತ್ತದೆ ಅಂತಹವರು ಮೊದಲು ತಮ್ಮ ದೇಹದ ತೂಕವನ್ನು ಹೇಗಾದರೂ ಕಡಿಮೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಆಲೋಚನೆ ಮಾಡಬೇಕು.
ಇಂತಹ ಸಂದರ್ಭದಲ್ಲಿ ನೆರವಾಗುವ ಒಂದು ನೈಸರ್ಗಿಕ ಪಾನೀಯ ಎಂದರೆ ಅದು ಅರಿಶಿನವನ್ನು ಮಿಶ್ರಣ ಮಾಡಿದ ನೀರು. ಸಾಧ್ಯವಾದರೆ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನವನ್ನು ಹಾಕಿ ಮಿಶ್ರಣ ಮಾಡಿಕೊಂಡು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದು ದೇಹದಲ್ಲಿರುವ ಬೊಜ್ಜನ್ನು ಕರಗಿಸಿ ದೇಹದ ತೂಕವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡಬಲ್ಲದು.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ:
ಅರಿಶಿನದಲ್ಲಿ ಎಂಡೋಟಾಕ್ಸಿನ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಶೀತದ ವಾತಾವರಣವನ್ನು ನಮ್ಮ ದೇಹದಿಂದ ದೂರ ಮಾಡುವ ಸ್ವಭಾವವನ್ನು ಹೊಂದಿವೆ. ವಿಶೇಷವಾಗಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಎದುರಾಗುವ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಅರಿಶಿನ ಪಡೆದುಕೊಂಡಿದೆ.
ಪ್ರತಿದಿನ ಅರಿಶಿನ ಮಿಶ್ರಿತ ನೀರನ್ನು ಕುಡಿಯುವುದರಿಂದ ನಮ್ಮ ದೇಹ ಆಂತರಿಕವಾಗಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಮತ್ತು ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.
ಗಮನಿಸಬೇಕಾದ ಅಂಶ:
ಅರಿಶಿನದ ಉಪಯೋಗಕ್ಕೆ ಸಂಬಂಧಪಟ್ಟಂತೆ ಈ ವಿಷಯವನ್ನು ನಾವು ನಿಮಗೆ ಹೇಳಲೇಬೇಕು.
ಕೆಲವೊಂದು ಪ್ರಕಾರದ ಆರೋಗ್ಯ ಸಮಸ್ಯೆಗಳನ್ನು ಅದಾಗಲೇ ಹೊಂದಿರುವವರು ಅರಿಶಿನ ಮಿಶ್ರಿತ ನೀರನ್ನು ಕುಡಿಯುವ ಮುಂಚೆ ಸ್ವಲ್ಪ ಆಲೋಚನೆ ಮಾಡಬೇಕು. ಅದೇನೆಂದರೆ,
* ಈಗಾಗಲೇ ಸರ್ಜರಿಗೆ ಒಳಗಾಗಿರುವವರು, ಬೈಲ್ ಜ್ಯೂಸ್ ಉತ್ಪತ್ತಿಯ ಪ್ರಮಾಣ ಸರಿಯಾಗಿ ಇಲ್ಲದೆ ಇರುವವರು ಅರಿಶಿನ ಮಿಶ್ರಿತ ನೀರನ್ನು ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಆರೋಗ್ಯದ ಮೇಲೆ ಕೆಲವೊಂದು ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
* ಅರಿಶಿನ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ನಿಯಂತ್ರಣದಲ್ಲಿ ಇರಿಸುವುದರಿಂದ ಯಾವುದೇ ಗಾಯವಾದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನ ಮಾಡಬಹುದು. ಹಾಗಾಗಿ ಅತಿಯಾದ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ.
* ಒಂದು ವೇಳೆ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದ್ದರೆ ಎರಡು ವಾರಗಳ ಮುಂಚೆ ಅರಿಶಿನ ಮಿಶ್ರಿತ ನೀರನ್ನು ಸೇವನೆ ಮಾಡುವುದು ಅಥವಾ ಅರಿಶಿನ ಬಳಕೆ ಮಾಡಿದ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೂರ ಉಳಿಯಿರಿ.
* ಒಂದು ವೇಳೆ ನೀವು ಈಗಾಗಲೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಅರಿಶಿನವನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡಿ. ಏಕೆಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಒಮ್ಮೆಲೆ ಕಡಿಮೆ ಮಾಡಿ ಬಿಡುವ ಸಾಧ್ಯತೆ ಇರುತ್ತದೆ.
* ಹೆಚ್ಚಿನ ಪ್ರಮಾಣದ ಅರಿಶಿನವನ್ನು ಬಳಕೆ ಮಾಡಲು ಮುಂದಾದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಸಿಗುವ ಕಬ್ಬಿಣದ ಅಂಶವನ್ನು ನಿಮ್ಮ ದೇಹ ಹೀರಿಕೊಳ್ಳುವ ಸಾಧ್ಯತೆ ಕಡಿಮೆ ಆದರೂ ಆಗಬಹುದು. ಒಂದು ವೇಳೆ ನೀವು ಅನಿಮೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ವಿಚಾರದಲ್ಲಿ ಎಚ್ಚರವಹಿಸುವುದು ಒಳ್ಳೆಯದು.






Leave a Reply