Sunday, September 24, 2023
Homeಮಲೆನಾಡುಚಿಕ್ಕಮಗಳೂರುಶೃಂಗೇರಿ: ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಮೆಮೋರಿಯಲ್ ಗೋಶಾಲೆಗೆ "ಅದ್ವೈತ ವೇದಾಂತ ಆಶ್ರಮ ಯೂರೋಪ್"ನ ಮುಖ್ಯಸ್ಥರ...

ಶೃಂಗೇರಿ: ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಮೆಮೋರಿಯಲ್ ಗೋಶಾಲೆಗೆ “ಅದ್ವೈತ ವೇದಾಂತ ಆಶ್ರಮ ಯೂರೋಪ್”ನ ಮುಖ್ಯಸ್ಥರ ಭೇಟಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಮೆಮೋರಿಯಲ್ ಗೋಶಾಲೆಗೆ “ಅದ್ವೈತ ವೇದಾಂತ ಆಶ್ರಮ ಯೂರೋಪ್”ನ ಮುಖ್ಯಸ್ಥರಾದ ಶ್ರೀ ಶ್ರೀ ಸಚ್ಚಿದಾನಂದ ಆಚಾರ್ಯ ಮತ್ತು ಅವರ ಶಿಷ್ಯಾರಾದ ಶ್ರೀ ಆಂಡ್ರಿವ್ ಡೇವಿಡ್ ಬೌಲೇ ಅವರು ಭೇಟಿ ನೀಡಿದರು.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಶ್ರೀ ಸಚ್ಚಿದಾನಂದ ಆಚಾರ್ಯ ಅವರು “ಸನಾತನ ಧರ್ಮದಲ್ಲಿ ಗೋವಿಗೆ ಅದರದ್ದೇ ಆದ ವಿಶೇಷ ಗೌರವವಿದೆ, ತಾಯಿಯಂತೆ ಅದನ್ನು ಪೂಜಿಸಲಾಗುತ್ತದೆ. ಗೋಮಾತೆಯಿಂದ ಸಿಗುವ ಪಂಚಗವ್ಯಕ್ಕೆ ತುಂಬಾ ತುಂಬಾ ಮಹತ್ವವಿದೆ. ನಾವು ಕೂಡ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಗೋಶಾಲೆಯನ್ನು ಯೂರೋಪಿನ ಅದ್ವೈತ ವೇದಾಂತ ಆಶ್ರಮದಲ್ಲಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


“ಗೋವುಗಳ ಸಂತತಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊರ ಬೇಕು, ಗಾವೋ ವಿಶ್ವಸ್ಯ ಮಾತರಃ ಎಂಬ ಮಾತಿನಂತೆ ಗೋಮಾತೆ ಜಗತ್ತಿನ ತಾಯಿ ಅವಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕೆಂದು ಆಂಡ್ರಿವ್ ಡೇವಿಡ್ ಬೌಲೇ ಹೇಳಿದರು.

ಶ್ರೀ ಚಂದ್ರಶೇಖರ ಭಾರತೀ ಮೆಮೋರಿಯಲ್ ಗೋಶಾಲೆಯ ಮುಖ್ಯಸ್ಥರಾದ ರಜಿತ್ ಗೌಡ ಬೇಸೂರ್, ತಿಮ್ಮಪ್ಪ ಗೌಡ ಬೇಸೂರ್, ಶ್ರೀದೇವಿ, ಶಿಕ್ಷಕರಾದ ಶ್ರೀ ಗುರುಮೂರ್ತಿಯವರು ಉಪಸ್ಥಿತರಿದ್ದರು.

ಇದನ್ನೂ ಓದಿ; ಕಡೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ

ಮೂಡಿಗೆರೆ: ಒಂದೇ ಪಾರ್ಟಿಯಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕೆ.. b b ನಿಂಗಯ್ಯ ಹೇಳಿದ್ದೇನು?

ಮೂಡಿಗೆರೆ: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಮೂಲ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತವಾಗಿತ್ತು. ಮುಂದುವರೆದ ಭಾಗವಾಗಿ ಈಗ ಬಿಬಿ ನಿಂಗಯ್ಯ ಕೂಡ ನಾನು ಜೆಡಿಎಸ್ ನಿಂದ ಸ್ಪರ್ಧಿಸುತ್ತೇನೆ ಎನ್ನುವುದರ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಇದನ್ನೂ ಓದಿ; ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ

ಬಿಜೆಪಿ ಘೋಷಿಸಿದ ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಬಿಜೆಪಿ ಹಾಲಿ ಶಾಸಕರಾಗಿದ್ದ ಎಂ ಪಿ ಕುಮಾರಸ್ವಾಮಿ ಅವರಿಗೆ ಕೈ ತಪ್ಪಿತ್ತು. ಕುಮಾರಸ್ವಾಮಿ ಬದಲಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಘೋಷಿಸಿತ್ತು. ಇದಾದ ಬಳಿಕ ಎಂ ಪಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಬಿಜೆಪಿ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಈಗ ಕ್ಷೇತ್ರದಲ್ಲಿ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ಈ ಹಿಂದೆ ಮಾಜಿ ಸಚಿವ ಬಿಬಿ ನಿಂಗಯ್ಯ ಅವರ ಹೆಸರು ಘೋಷಣೆ ಮಾಡಿತ್ತು, ಅದರೆ ಎಂ ಪಿ ಕುಮಾರಸ್ವಾಮಿ ಸೇರ್ಪಡೆ ಬಳಿಕ ಅವರಿಗೆ ಟಿಕೆಟ್ ಘೋಷಿಸಿ ಬಿ ಫಾರಂ ನೀಡಿದೆ. ಆದರೆ ಇಷ್ಟಕ್ಕೇ ನಿಲ್ಲದ ಟಿಕೆಟ್ ಗೊಂದಲ ಈಗ ಹೊಸ ತಿರುವು ಪಡೆದುಕೊಂಡಿದೆ. ಮಾಜಿ ಶಾಸಕ ಈ ಹಿಂದೆ ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದ ಬಿಬಿ ನಿಂಗಯ್ಯ ಈಗ ತಾನೂ ಜನತಾದಳ ದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದು ಇದೇ 19ರಂದು ನಾಮಪತ್ರ ಸಲ್ಲಿಸಲ್ಲಿದ್ದೇನೆ ಎಂದಿದ್ದಾರೆ. ಇತ್ತ ಎಂ ಪಿ ಕುಮಾರಸ್ವಾಮಿ ಕೂಡ ನಾನು ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದು, ಜನತೆ ಆಶೀರ್ವಾದ ಮಾಡಬೇಕು ಎಂದಿದ್ದಾರೆ.

ಮೂಲ ಕಾರ್ಯಕರ್ತರಿಂದ ಎಂಪಿಕೆಗೆ ವಿರೋಧ

ಜೆಡಿಎಸ್ ನ ಮೂಲ ಕಾರ್ಯಕರ್ತರು ಹಾಗೂ ಮುಖಂಡರು ಮಾಜಿ ಶಾಸಕ ಬಿಬಿ ನಿಂಗಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದು ಬಿಬಿ ನಿಂಗಯ್ಯ ಹೀಗಾಗಿ ಜೆಡಿಎಸ್ ನ ವರಿಷ್ಠರು ಮತ್ತೊಮ್ಮೆ ಪರಿಶೀಲನೆ ನಡೆಸಿ ಬಿಬಿ ನಿಂಗಯ್ಯ ಅವರನ್ನೇ ಕಣಕ್ಕಿಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಹೀಗಾಗದಿದ್ದಲ್ಲ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಮೂಡಿಗೆರೆ ಕ್ಷೇತ್ರ ಮತ್ತೆ ಜೆಡಿಎಸ್ ಗೆ ತಲೆನೋವಾದಂತಾಗಿದೆ.

ಇದನ್ನೂ ಓದಿ; ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ

ಜೆಡಿಎಸ್ ನಿಂದ ದ್ವಂದ್ವ ನಿಲುವು

ಇತ್ತೀಚಿಗೆ ಕಡೂರಿನಲ್ಲಿ ಕೂಡ ಜೆಡಿಎಸ್ ಇದೇ ದ್ವಂದ್ವ ನಿಲುವು ತೋರಿತ್ತು. ಮೊದಲ ಪಟ್ಟಿಯಲ್ಲಿ ಕಡೂರಿನ ಅಭ್ಯರ್ಥಿಯಾಗಿ ಸಿ ಎಂ ಧನಂಜಯ ಅವರ ಹೆಸರು ಘೋಷಣೆಯಾಗಿತ್ತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತಾ ಕೈ ಟಿಕೆಟ್ ಸಿಗದ ಪರಿಣಾಮ ಮರಳಿ ಜೆಡಿಎಸ್ ಸೇರ್ಪಡೆಯಾಗಿದ್ದರು. ದತ್ತಾ ಪಕ್ಷಕ್ಕೆ ವಾಪಾಸ್ ಮರಳುತ್ತಿದ್ದಂತೆ ಸಿಎಂ ಧನಂಜಯ್ ಗೆ ಟಿಕೆಟ್ ಕ್ಯಾನ್ಸಲ್ ಮಾಡಿ ದತ್ತಾ ಅವರ ಹೆಸರು ಘೋಷಿಸಿತ್ತು. ಇಲ್ಲೂ ಕೂಡ ಸಿಎಂ ಧನಂಜಯ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.

Most Popular

Recent Comments