ಶೃಂಗೇರಿ : ವೆರಿಕೋಸ್ ವೇಯ್ನ್ ಖಾಯಿಲೆಗೆ ಆಪರೇಷನ್ ರಹಿತವಾಗಿ ಔಷಧಿ ನೀಡಿ ಖಾಯಿಲೆ ಗುಣಪಡಿಸುವ ಪ್ರಖ್ಯಾತ ವೈದ್ಯ ಡಾ. ಎಮ್.ವಿ ಉರಾಳ್ ಅವರಿಗೆ “ಶ್ರೇಷ್ಠ ಕನ್ನಡಿಗ” ಎಂಬ ಪ್ರಶಸ್ತಿಯನ್ನು ಶಿವಮೊಗ್ಗದ ಗಂಧದ ಗುಡಿ ಫೌಂಡೇಶನ್ ಘೋಷಣೆ ಮಾಡಿದೆ.
ವೈದ್ಯ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು, ವೆರಿಕೋಸ್ ವೇಯ್ನ್ ಖಾಯಿಲೆಗೆ ಆಪರೇಷನ್ ರಹಿತವಾಗಿ ಔಷಧಿಯನ್ನು ಕಂಡು ಹಿಡಿದಿರುವುದು ಹಾಗೂ ಅನೇಕ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ಔಷಧಿ ನೀಡಿ ಖಾಯಿಲೆ ಗುಣಪಡಿಸಿದ ಡಾ. ಉರಾಳ್ ಅವರನ್ನು ಗುರುತಿಸಿ 2021 ನೆ ಸಾಲಿನ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ಉರಾಳ್ ಅವರಿಗೆ ನೀಡಿ ಗೌರವಿಸಿದ್ದಾರೆ.
ಜನರೊಂದಿಗೆ ಸದಾ ಕಾಲ ಬೆರೆತು ಅತ್ಯಮೂಲ್ಯವಾದ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುತ್ತಿರುವ ವೈದ್ಯ ಉರಾಳ್ ಅವರ ಸೇವೆಯನ್ನು ಅದೆಷ್ಟೋ ಜನರು ಮೆಚ್ಚಿದ್ದಾರೆ. ಬಡವರಿಗಾಗಿ ಸದಾ ಮುನ್ನೆಲೆಯಲ್ಲಿ ಸಹಾಯ ಮಾಡುತ್ತಿರುವ ವೈದ್ಯ ಉರಾಳ್ ಅವರ ಸೇವೆ ಪ್ರಶಂಸನೀಯ ಎಂದು ಗಂಧದ ಗುಡಿ ಫೌಂಡೇಶನ್ ನ ರಾಜ್ಯಾಧ್ಯಕ್ಷರಾದ ಆರ್ಯನ್ ತಿಳಿಸಿದ್ದಾರೆ. ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಇದೇ ತಿಂಗಳ 21 ನೆಯ ತಾರೀಖು ಶಿವಮೊಗ್ಗದಲ್ಲಿ ನಡೆಯಲಿದೆ.
ಡಾ. ಉರಾಳ್ ಅವರ ಕುರಿತು :
ವೆರಿಕೋಸ್ ವೇಯ್ನ್ ತಜ್ಞ ಡಾ. ಎಂ. ವಿ ಉರಾಳ್ ರವರು ಮೂಲತಃ ಉಡುಪಿ ಜಿಲ್ಲೆಯ ಕೋಟಾದ ಮಣೂರಿನವರು ಇವರ ತಂದೆ ರಾಧಾಕೃಷ್ಣ ಉರಾಳ್ ತಾಯಿ ಮಹಾಲಕ್ಷ್ಮಿ.
ಇವರು ತಮ್ಮ ಪಿಯುಸಿ ವಿದ್ಯಾಭ್ಯಾಸವನ್ನು ಕೋಟ ವಿವೇಕ ಜೂನಿಯರ್ ಕಾಲೇಜಿನಲ್ಲಿ ನಡೆಸಿದರು. ನಂತರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ALN ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ (ಬಿ. ಎ. ಎಂ. ಎಸ್ ) ಕೋರ್ಸ್ ಪೂರೈಸಿದರು. ನಂತರ ಮಣಿಪಾಲ ವಿಶ್ವವಿದ್ಯಾಲಯದಿಂದ FAGE ಪಡೆದರು. ಆಯುರ್ವೇದ ಅಧ್ಯಯನ ಮುಗಿಸಿದ ನಂತರ ಶೃಂಗೇರಿಯಲ್ಲಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿ ಸರಳ ಗಿಡಮೂಲಿಕೆಗಳ ಸಂಯೋಜನೆಯೊಂದಿಗೆ ವಿವಿಧ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.
ನಂತರ ಅನೇಕ ಜನರನ್ನು ಕಟುವಾಗಿ ಕಾಡುತ್ತಿರುವ ವೆರಿಕೋಸ್ ವೇಯ್ನ್ ರೋಗಕ್ಕೆ ಸೂಕ್ತವಾದ ಔಷಧಿ ಇಲ್ಲದಿರುವುದನ್ನು ಮನಗಂಡು ತಮ್ಮದೇ ಪರಿಕಲ್ಪನೆಯಿಂದ ಸಂಶೋಧನಾ ಸಂಸ್ಥೆಗಳ ಸಹಯೋಗ ಹಾಗೂ ಸತತ 5 ವರ್ಷಗಳ ಕಾಲ ಕ್ಲಿನಿಕಲ್ ಸಂಶೋಧನೆಯೊಂದಿಗೆ ಶಸ್ತ್ರ ಚಿಕಿತ್ಸೆಯಿಲ್ಲದೇ ವೆರಿಕೋಸ್ ವೇಯ್ನ್ ಕಡಿಮೆ ಮಾಡುವಂತಹ ಒಂದು ಕ್ರಾಂತಿಕಾರಿ ಆಯುರ್ವೇದ ಔಷಧಿಯನ್ನು ಆವಿಷ್ಕಾರ ಮಾಡಿದರು.
ಇಲ್ಲಿಯವರೆಗೆ ಇವರಿಂದ 3000 ಕ್ಕೂ ಹೆಚ್ಚು ರೋಗಿಗಳು ಯಶಸ್ವಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಹಲವು ಚಿಕಿತ್ಸೆಯಿಂದ ಗುಣವಾಗದ ವೆರಿಕೋಸ್ ವೇಯ್ನ್ ಗಾಯಗಳು ಇವರ ಚಿಕಿತ್ಸೆಯಿಂದ ಗುಣವಾಗಿದ್ದು ಉರಾಳ್ ರ ಹೆಗ್ಗಳಿಕೆಯಾಗಿದೆ.
ಇವರು ವೆರಿಕೋಸ್ ವೇನ್ಸ್ ನ ಉಪದ್ರವಗಳನ್ನು ಕಡಿಮೆಮಾಡುವ ಕೌಶಲ್ಯಗಳನ್ನು ಕಲಿತು ಓಷಧಿಯನ್ನು ತಯಾರಿಸಿ ವ್ಯಕ್ತಿಯ ಕಾಲು ಮತ್ತು ಕಾಲಬೆರಳುಗಳನ್ನು ಕತ್ತರಿಸುವುದನ್ನು ತಡೆದಿದ್ದಾರೆ. ಇವರು ತಮ್ಮ ಮಾತು ಹಾಗೂ ಚಿಕಿತ್ಸೆಯಿಂದ ಜೀವನದಲ್ಲಿ ಭರವಸೆ ಕಳೆದುಕೊಂಡ ರೋಗಿಗಳಿಗೆ ಭರವಸೆಯನ್ನು ತುಂಬಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ರೋಗಿಗಳು ಇವರಿಂದ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ.
ಮನುಷ್ಯರಲ್ಲಿ ಕಾಣುವ ಗಂಭೀರವಾದ ವೆರಿಕೋಸ್ ವೇನ್ಸ್ ಖಾಯಿಲೆಯ ಬಗ್ಗೆ ರೋಟರಿ, ಲಯನ್ಸ್ ಕ್ಲಬ್, ಜೆಸಿಐ, ಸಂಘ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ವೆರಿಕೋಸ್ ಮುಕ್ತ ಸಮಾಜವನ್ನು ನಿರ್ಮಿಸುವುದು ಇವರ ಕನಸಾಗಿದ್ದು ಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಕಡಿಮೆ ದರದಲ್ಲಿ ಶೀಘ್ರ ಪರಿಣಾಮಕಾರಿಯಾದಂತಹ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಎಂ. ವಿ. ಉರಾಳ್
ವೆರಿಕೋಸ್ ವೇನ್ಸ್ ತಜ್ಞ
+91 84311 14028
visit : http://www.uralsayurveda.in