ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಪವಿತ್ರವನ ಎದುರು ಕಳೆದ ಮೂರು ದಿನಗಳಿಂದ ಚಾಲನೆ ಸ್ಥಿತಿಯಲ್ಲೇ ನಿಂತಿದ್ದ ಕಲ್ಲಿದ್ದಲು ತುಂಬಿದ್ದ ಲಾರಿಯಲ್ಲಿ ಚಾಲಕನ ಮೃತದೇಹ ಪತ್ತೆಯಾಗಿದೆ. ಕಡೂರು ತಾಲೂಕಿನ ಹಳೇಸಿದ್ರಳ್ಳಿಯ ಗೋಪಾಲ್(40) ಮೃತ ಚಾಲಕ.
ಇದನ್ನೂ ಓದಿ; ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
ಈತ ಮಂಗಳೂರು ಹಾರ್ಬರ್ ನಿಂದ ಕಲ್ಲಿದ್ದಲು ಲೋಡ್ ಮಾಡಿಕೊಂಡು ಬಳ್ಳಾರಿ ಜಿಲ್ಲೆಯ ಮದ್ದೂರಿಗೆ ಹೊರಟಿದ್ದರು. ಏ.29 ರಂದು ರಾತ್ರಿ ಮಂಗಳೂರಿನಿಂದ ಹೊರಟಿದ್ದ ಲಾರಿ ಚಿಕ್ಕಮಗಳೂರಿನ ಪವಿತ್ರವನ ಎದುರು ಚಾಲನೆ ಸ್ಥಿತಿಯಲ್ಲೇ ನಿಂತಿತ್ತು.
ಪವಿತ್ರವನ ಸಮೀಪ ವಾಯುವಿಹಾರಕ್ಕೆ ತೆರಳುತ್ತಿದ್ದವರು ಲಾರಿಯನ್ನು ಗಮನಿಸಿದ್ದರು. ಚಾಲನೆ ಸ್ಥಿತಿಯಲ್ಲಿದ್ದ ಕಾರಣ ಚಾಲಕ ನಿಲ್ಲಿಸಿ ಹೋಗಿರಬಹುದೆಂದು ಭಾವಿಸಿದ್ದರು. ಸತತ ಮೂರನೇ ದಿನವೂ ಲಾರಿ ಚಾಲನೆ ಸ್ಥಿತಿಯಲ್ಲೇ ಇರುವುದನ್ನು ಕಂಡು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿ ಪರಿಶೀಲಿಸಿದಾಗ ಚಾಲಕನ ಮೃತದೇಹ ಪತ್ತೆಯಾಗಿದೆ. ಚಿಕ್ಕಮಗಳೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ
- ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 425 ಮದ್ಯದ ಬಾಕ್ಸ್ ವಶ
- ಭದ್ರ ನದಿಯ ಆಳ ಕೇಳುತ್ತಿದ್ದ ವೃದ್ದೆ ನಾಪತ್ತೆ
ಪತ್ನಿ, ಮಗಳ ನೋಡಲು ಮಾರ್ಗ ಬದಲು:
ಸಾಮಾನ್ಯವಾಗಿ ಮಂಗಳೂರಿನಿಂದ ಹೊರಟ ಕಲ್ಲಿದ್ದಲು ತುಂಬಿದ್ದ ಲಾರಿಗಳು ಬೇಲೂರು ಮಾರ್ಗವಾಗಿ ಬಳ್ಳಾರಿ ಜಿಲ್ಲೆಯ ಮದ್ದೂರಿಗೆ ತೆರಳುತ್ತಿದ್ದವು. ಆದರೆ ಗೋಪಾಲ್ ಮನೆ ಕಡೂರಿನ ಹಳೇ ಸಿದಳ್ಳಿಯಲ್ಲಿದ್ದ ಕಾರಣ ಮಾರ್ಗ ಬದಲಿಸಿ ಚಿಕ್ಕಮಗಳೂರು ಮಾರ್ಗವಾಗಿ ಬಂದಿದ್ದಾರೆ. ಈ ವೇಳೆ ಪವಿತ್ರವನದ ಬಳಿ ಲಾರಿ ಚಾಲನೆ ಸ್ಥಿತಿಯಲ್ಲೇ ನಿಲ್ಲಿಸಿದ್ದಾರೆ. ಅದಾದ ಬಳಿಕ ಏನಾಯಿತು ಎಂಬ ಮಾಹಿತಿ ಯಾರಿಗೂ ಇಲ್ಲ. ಲಾರಿಯಲ್ಲಿ ಚಾಲಕ ಗೋಪಾಲ್ ಒಬ್ಬರೇ ಇದ್ದು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ಬಳಿಕ ನಿಖರ ಮಾಹಿತಿ ತಿಳಿಯಲಿದೆ.
ಮಾಲೀಕರಿಂದಲೂ ಹುಡುಕಾಟ:
ಕಾರ್ಕಳದ ಮಹೇಶ ಅಂಜನ್ ಎಂಬುವರಿಗೆ ಸೇರಿದ ಲಾರಿಯಲ್ಲಿ ಕಲ್ಲಿದ್ದಲು ಲೋಡ್ ಮಾಡಿಕೊಂಡು ಹೊರಟ ಲಾರಿ ನಿಗದಿತ ಸ್ಥಳಕ್ಕೆ ತಲುಪಿರಲಿಲ್ಲ. ಹಾಗಾಗಿ ಆತಂಕಗೊಂಡ ಮಾಲೀಕರು ಲಾರಿ ಚಾಲಕ ಗೋಪಾಲ್ಗೆ ಹಲವು ಬಾರಿ ಫೋನ್ ಮಾಡಿದ್ದರು. ಆದರೆ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ಕಲ್ಲಿದ್ದಲು ತುಂಬಿಕೊಂಡು ಹೋಗುವ ಮಾರ್ಗದಲ್ಲಿ ಹೊಸದುರ್ಗವರೆಗೂ ಮಾಲೀಕರು ಲಾರಿ ಹುಡುಕಿಕೊಂಡು ಹೋಗಿದ್ದರು. ಆನಂತರ ಪೊಲೀಸರು ಫೋನ್ ಮಾಡಿದ ಬಳಿಕ ಚಿಕ್ಕಮಗಳೂರಿಗೆ ಆಗಮಿಸಿದ್ದರು.
ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ “ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ”
ಜಯಪುರ/ಹರಿಹರಪುರ: ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಮೇ 4ರ ಗುರವಾರದಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ ನಡೆಯಲಿದೆ.
ಇದನ್ನೂ ಓದಿ; ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
ಬೆಳಗ್ಗೆ 9 ಕ್ಕೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಕಲ್ಪೋಕ್ತ ಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ನಡೆಯಲಿದೆ. 11.30ಕ್ಕೆ ಪರಮಪೂಜ್ಯ ಜಗಧ್ಗುರುಗಳಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ, ಕರ್ನಾಟಕ ಬ್ಯಾಂಕಿನ ನಿವೃತ್ತ ಚೇರ್ಮನ್ ಮಹಬಲೇಶ್ವರ ಭಟ್, ಸಾಮಾಜಿಕ ಕಾರ್ಯಕರ್ತರಾದ ದೇವಾನಂದ್ ಹಾಗೂ ಶ್ರೀ ಮಠದ ಭಕ್ತರು ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ; ಕುಂದಾಪುರಕ್ಕೆ ಹೋಗುತ್ತಿದ್ದ ಬಸ್ ಪಲ್ಟಿ; 15 ಮಂದಿಗೆ ಗಾಯ
ಸಂಜೆ 5ಕ್ಕೆ ಕಲ್ಯಾಣೋತ್ಸವ 7ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಬೈಂದೂರಿನ ಧಾರೇಶ್ವರ ಯಕ್ಷ ಚಾರಿಟೇಬಲ್ ಟ್ರಸ್ಟ್ ನ ಕಲಾವಿದರಿಂದ ” ರಾವಣ ಮೋಕ್ಷ” ಎಂಬ ಯಕ್ಷಗಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.