Thursday, April 18, 2024
Homeಆಧ್ಯಾತ್ಮಹೊಸ ವರ್ಷಾಚರಣೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್

ಹೊಸ ವರ್ಷಾಚರಣೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಜನವರಿ 1 ರಂದು ಹೊಸ ವರ್ಷಾಚರಣೆ ಮಾಡಿದರೆ ರಾಜ್ಯದಲ್ಲಿ ಧರಣಿಯನ್ನು ನಡೆಸಲಾಗುವುದು ಎಂದು ಶ್ರೀ ರಾಮ ಸೇನೆಯ ರಾಷ್ಟೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ, ಇಸ್ಕಾನ್, ಹಾಗೂ ಆರ್ಟ್ ಆಫ್ ಲಿವಿಂಗ್ ನಲ್ಲಿ ಕ್ರೈಸ್ತರ ಹೊಸ ವರ್ಷವನ್ನು ಆಚರಿಸುತ್ತಾರೆ. ಆಚರಣೆಯಲ್ಲಿ ವಿಶೇಷ ಪೂಜೆ, ದೀಪಾಲಂಕಾರ, ಸ್ವಾಗತ ಫಲಕಗಳನ್ನು ಅಳವಡಿಸುವುದು. ಈ ತರ ಆಚರಣೆ ಮಾಡುವುದರಿಂದ ಹಿಂದೂ ಧರ್ಮಕ್ಕೆ ಹಿಂದೂ ಧರ್ಮದವರಿಗೆ ತಪ್ಪಾದ ಮಾಹಿತಿ ತಲುಪುತ್ತದೆ.

ಹಿಂದೂ ಧರ್ಮದವರಿಗೆ ಹೊಸ ವರ್ಷಾಚಾರಣೆ ಎಂದರೆ ಅದು ಯುಗಾದಿಯಂದು. ಅಂದು ಹಿಂದುಗಳಿಗೆ ನಿಜವಾದ ಹೊಸ ವರ್ಷಾಚಾರಣೆ

ಕ್ರೈಸ್ತರ ವರ್ಷಚಾರಣೆ ಮಾಡದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಇಸ್ಕಾನ್ ಟೆಂಪಲ್ ನ ಮಧುದಾಸ ಪಂಡಿತ, ಮತ್ತು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿಯವರಿಗೆ ಪತ್ರವನ್ನು ಬರೆದಿದ್ದಾರೆ. ಹಾಗೂ ಹೊಸ ವರ್ಷಾಚಾರಣೆಯನ್ನು ಆಚರಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Most Popular

Recent Comments