Tuesday, November 28, 2023
Homeಇತರೆಖೋಟಾನೋಟು ಪ್ರಕರಣದಲ್ಲಿ 5 ಲಕ್ಷ ಹಣವನ್ನು ಲಂಚ ಪಡೆದ ಆರೋಪ : ಎಸ್ ಐ ಅಮಾನತು

ಖೋಟಾನೋಟು ಪ್ರಕರಣದಲ್ಲಿ 5 ಲಕ್ಷ ಹಣವನ್ನು ಲಂಚ ಪಡೆದ ಆರೋಪ : ಎಸ್ ಐ ಅಮಾನತು

ಬೆಂಗಳೂರು: ಖೋಟಾನೋಟು ಪ್ರಕರಣದಲ್ಲಿ ಐದು ಲಕ್ಷ ರೂಪಾಯಿ ಲಂಚವನ್ನು ಪಡೆದ ಆರೋಪ ಎದುರಿಸುತ್ತಿರುವ ಸಬ್​ ಇನ್​ಸ್ಪೆಕ್ಟರ್​ ಪೊಲೀಸ್ ಹುದ್ದೆಯಿಂದ ಅಮಾನತುಗೊಂಡಿದ್ದಾರೆ.

ಬೆಂಗಳೂರಿನ ಗೋವಿಂದಪುರ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ಇಮ್ರಾನ್​ ಅಲಿ ಅಮಾನತುಗೊಂಡಿರುವ ವ್ಯಕ್ತಿ, ಆರೋಪಿ ಎಸ್​ಐಯನ್ನು ಬೆಂಗಳೂರಿನ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಶರಣಪ್ಪ ಅಮಾನತುಗೊಳಿಸಿದ್ದಾರೆ

ಖೋಟಾನೋಟು ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಗಳಿಗೆ ಅನುಕೂಲ ಮಾಡಿಕೊಡಲು ಐದು ಲಕ್ಷ ರೂಪಾಯಿ ಲಂಚವನ್ನು ಕೊಡುವಂತೆ ಬೇಡಿಕೆಯನ್ನು ಇಟ್ಟಿದ್ದರು . ಇದು ಬೆಳಕಿಗೆ ಬರುತ್ತಿದ್ದಂತೆ ಎಸಿಪಿಯೊಬ್ಬರಿಂದ ತನಿಖೆ ನಡೆಸಲಾಗಿದೆ. ಆಗ ಪಿಎಸ್​ಐ ಲಂಚವನ್ನು ಪಡೆದಿರುವುದು ತನಿಖೆಯಲ್ಲಿ ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್​ ಅಲಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

Most Popular

Recent Comments