Monday, December 11, 2023
Homeಆಧ್ಯಾತ್ಮಹಂಸಲೇಖರವರು ಗುರುಗಳ ಬೃಂದಾವನದ ಮುಂದೆ ನಿಂತು ಬಹಿರಂಗ ಕ್ಷಮೆ ಕೇಳಲು ಆಗ್ರಹ: ಅಖಿಲ ಭಾರತ ಬ್ರಾಹ್ಮಣ...

ಹಂಸಲೇಖರವರು ಗುರುಗಳ ಬೃಂದಾವನದ ಮುಂದೆ ನಿಂತು ಬಹಿರಂಗ ಕ್ಷಮೆ ಕೇಳಲು ಆಗ್ರಹ: ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಯುವ ವೇದಿಕೆ ದೂರು

ಬೆಂಗಳೂರು: ದಲಿತರ ಮನೆಗೆ ಭೇಟಿ ನೀಡಿದ ಸಂದರ್ಭವನ್ನು ಹಂಸಲೇಖ ವಿವಾದ ಸೃಷ್ಟಿಸುವಂತಹ ಹೇಳಿಕೆಯನ್ನು ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ದೂರನ್ನು ನೀಡಿದ್ದಾರೆ.

ಹಂಸಲೇಖ ವಿರುದ್ಧ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ದೂರನ್ನು ದಾಖಲಿಸಿದ್ದಾರೆ.

‘ನಾನು ಒಬ್ಬ ಸಂಗೀತಗಾರ, ನನಗೆ ಯಾವ ವ್ಯಕ್ತಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖವನ್ನು ಕೊಡಬೇಕು. ‘ಎಲ್ಲಾ ಮಾತುಗಳಿಗೂ ಅದು ತಕ್ಕ ವೇದಿಕೆಯಲ್ಲ. ಸಾರ್ವಜನಿಕ ವೇದಿಕೆಯಲ್ಲಿ ನಿಂತು ನುಡಿದರೆ ಮಾತು ಮುತ್ತಿನಹಾರದಂತಿರಬೇಕು ಆದರೆ, ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರವಾದ ಗೌರವವಿದೆ’ ಎಂದು ಹಂಸಲೇಖ ಅವರು ವಿಡಿಯೋ ಮೂಲಕ ಕ್ಷಮೆಯನ್ನು ಕೇಳಿದ್ದರು.

ಅವರು ಕ್ಷಮೆ ಕೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಮುದಾಯ ನಾಲ್ಕು ಗೋಡೆಯ ಮಧ್ಯೆ ನಿಂತು ವಿಡಿಯೋ ಮುಖಾಂತರ ಕ್ಷಮೆ ಕೇಳುವುದಲ್ಲ, ವಿದ್ಯಾಪೀಠ ಸರ್ಕಲ್ ಬಳಿ ಇರುವಂತಹ ಪೇಜಾವರ ಶ್ರೀಗಳ ಬೃಂದಾವನದ ಮುಂದೆ ನಿಂತು ಎಲ್ಲರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೃಷ್ಣ ಹೇಳಿದ್ದಾರೆ.

Most Popular

Recent Comments