Sunday, October 1, 2023
Homeಉದ್ಯೋಗಅಪ್ರಾಮಾಣಿಕ ಅಶಿಸ್ತಿನ ಪೋಲೀಸ್ ಸಿಬ್ಬಂದಿಯನ್ನು ಎಂದಿಗೂ ಸಹಿಸುವುದಿಲ್ಲ: ಆರಗ ಜ್ಞಾನೇಂದ್ರ

ಅಪ್ರಾಮಾಣಿಕ ಅಶಿಸ್ತಿನ ಪೋಲೀಸ್ ಸಿಬ್ಬಂದಿಯನ್ನು ಎಂದಿಗೂ ಸಹಿಸುವುದಿಲ್ಲ: ಆರಗ ಜ್ಞಾನೇಂದ್ರ

ಬೆಂಗಳೂರು: ಅಪ್ರಾಮಾಣಿಕ ಮತ್ತು ಅಶಿಸ್ತಿನ ಪೊಲೀಸ್ ಸಿಬ್ಬಂದಿಯನ್ನು ಯಾವ ಕಾರಣಕ್ಕೂ ನಾನು ಎಂದಿಗೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಳವು ಮತ್ತು ಜಪ್ತಿ ಮಾಡಿದ ವಸ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಸ್ವತ್ತು ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪರಾಧ ಪ್ರಕರಣಗಳಲ್ಲಿ ಪೊಲೀಸರೂ ಸಹ ಭಾಗಿಯಾಗಿದ್ದಾರೆ ಎಂದಾಗ ಅಂತಹವರ ಮೇಲೆ ಅಸಹ್ಯದ ಭಾವನೆ ಮೂಡುತ್ತದೆ. ಇದರಿಂದ ಪ್ರಾಮಾಣಿಕ ಪೊಲೀಸ್ ವೃಂದಕ್ಕೂ ಕಪ್ಪು ಚುಕ್ಕೆ ಬರುತ್ತದೆ ಹಾಗಾಗಿ, ಅಪ್ರಾಮಾಣಿಕ ಪೊಲೀಸರ ಪಟ್ಟಿಯನ್ನು ಸಿದ್ಧಪಡಿಸಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟಬುತ್ತಿಯಾಗಿದೆ ವರ್ಗಾವಣೆ ವ್ಯವಸ್ಥೆಯಲ್ಲಿಯೂ ಸಹ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಣಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಯಾರು ಕೆಟ್ಟರೂ ತೊಂದರೆಯಾಗುವುದಿಲ್ಲ. ಆದರೆ, ಒಬ್ಬ ಪೊಲೀಸ್ ತಪ್ಪು ದಾರಿ ಹಿಡಿದಾಗ, ಸಮಾಜದ ಮೇಲೆ ಬಹಳ ದೊಡ್ಡ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ. ಎಂದಿಗೂ ಹಣದ ದಾಸರಾಗಿ ಅದರ ಹಿಂದೆ ಹೋಗಬೇಡಿ. ಅಪರಾಧಿಗಳನ್ನು ಪೋಷಿಸುವ ಕೆಲಸವನ್ನು ಮಾಡದೆ, ಅವರನ್ನು ಹತ್ತಿಕ್ಕಬೇಕು ಎಂದು ಕಿವಿಮಾತನ್ನು ಹೇಳಿದ್ದಾರೆ.

ಹಲವಾರು ಸೂಕ್ಷ್ಮ ಪ್ರಕರಣಗಳಲ್ಲಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಜ್ಞಾನೇಂದ್ರರವರು, ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳನ್ನು ಮಾಡುತ್ತಿರುವ ಅಪರಾಧಿಗಳಿಗಿಂತ ಈ ಪಡೆ ವೇಗವಾಗಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು. 56 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದು 32 ಕೋಟಿ ಮೌಲ್ಯದ ಔಷಧಗಳನ್ನು ಪ್ರದರ್ಶಿಸಲಾಯಿತು. 18 ಸಂತ್ರಸ್ತರಿಗೆ ಸಾಂಕೇತಿಕವಾಗಿ ಗೃಹಸಚಿವರು ಹಿಂದಿರುಗಿಸಿದ್ದಾರೆ. ಇದೇ ಸಮಯದಲ್ಲಿ 400 ಪೊಲೀಸ್ ಸಿಬ್ಬಂದಿಗೆ 18 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ.

Most Popular

Recent Comments