Saturday, June 10, 2023
Homeಮಲೆನಾಡುಚಿಕ್ಕಮಗಳೂರುಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳ್ಳತನವಾಗಿದ್ದ 30 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

ಎಸ್ಪಿ ಕಚೇರಿ ಸಭಾಂಗಣದಲ್ಲಿ ಸಿಇಐಆರ್ ಪೋರ್ಟ್ ನಲ್ಲಿ ದಾಖಲಾದ ಪ್ರಕರಣಗಳ ಸಂಬಂಧ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡವರಿಗೆ ವಾಪಾಸ್ ನೀಡಿ ಮಾತಾನಾಡಿದ ಅವರು, ದೂರ ಸಂಪರ್ಕ ಇಲಾಖೆ ವತಿಯಿಂದ ಸಿಇಐಆರ್ (ಸೆಂಟ್ರಲ್ ಎಕ್ಯುಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ಇದು ನಾಗರೀಕ ಸ್ನೇಹಿ ವೆಬ್ ಪೋರ್ಟಲ್ ಆಗಿದೆ ಎಂದು ಹೇಳಿದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮೊಬೈಲ್ ಕಳೆದುಕೊಂಡವರು ಪೋರ್ಟ ನಲ್ಲಿ ರಿಜಿಸ್ಟರ್ ಮಾಡಿದರೆ ಆ ಬಗ್ಗೆ ಪೊಲೀಸರಿಗೆ ಮಾಹಿತಿ ಬರುತ್ತದೆ. ಈ ರೀತಿ ರಿಜಿಸ್ಟರ್ ಮಾಡುವುದರಿಂದ ಬೇರೆಯವರು ಆ ಮೊಬೈಲ್‌ನ್ನು ಬಳಸದ ರೀತಿ ನಂಬರ್ ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಆ ಮೊಬೈಲ್ ಅನ್ನು ಯಾರಾದರೂ ಬಳಸುತ್ತಿದ್ದರೆ ಪೊಲೀಸ್ ಇಲಾಖೆಗೆ ಅಲರ್ಟ್ ಮೆಸೇಜ್ ಬರುತ್ತದೆ. ಇದರ ಆಧಾರದಲ್ಲಿ ಈ ವರೆಗೆ 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದೇವೆ ಎಂದರು.

ಈವರೆಗೆ ನಮ್ಮ ಜಿಲ್ಲೆಯಲ್ಲಿ 377 ಮೊಬೈಲ್‌ಗಳನ್ನು ಜನರು ಕಳೆದುಕೊಂಡಿದ್ದಾರೆ. ಈ ಬಗ್ಗೆ ವೆಬ್ ಪೋರ್ಟಲ್ ಮತ್ತು ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ಈ ಪೈಕಿ ಈ ವರೆಗೆ ಒಟ್ಟು 144 ಮೊಬೈಲ್‌ಗಳು ಇರುವಿಕೆ ಬಗ್ಗೆ ವರದಿಗಳು ಸಿಕ್ಕಿವೆ. ಅವುಗಳನ್ನು ಬೇರೆ ಬೇರೆಯವರು ಉಪಯೋಗಿಸುತ್ತಿದ್ದಾರೆ. ಕೆಲವರು ಮತ್ತೆ ಸ್ವಿಚ್ ಆಫ್ ಮಾಡಿದ್ದಾರೆ. ಇನ್ನೂ ಕೆಲವು ಬೇರೆ ಬೇರೆ ರಾಜ್ಯಗಳಲ್ಲಿ ಉಪಯೋಗಿಸಲ್ಪಡುತ್ತಿವೆ. ಅವುಗಳನ್ನು ಶೀಘ್ರದಲ್ಲೇ ಕಂಡು ಹಿಡಿದು ತರಿಸಿಕೊಂಡು ವಾರಸುದಾರರಿಗೆ ನೀಡುವ ಕೆಲಸ ಆಗುತ್ತದೆ ಎಂದರು.

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಏನಿದು ಸಿಇಐಆರ್ ಪೋರ್ಟಲ್?
ಕಳ್ಳತನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೊಬೈಲ್ ಫೋನ್ ಕಳೆದುಕೊಂಡರೆ ಅದನ್ನು ಬ್ಲಾಕ್ ಮಾಡಲು ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಹೊಸ ವಿಧಾನವೇ ಸಿಇಐಆರ್ ಪೋರ್ಟಲ್(CEIR-central Equipment Identify Registration Portal). ಮೊಬೈಲ್ ಫೋನ್ ಕಳೆದುಹೋದ ಕೂಡಲೇ ಹತ್ತಿರದ ಪೊಲೀಸಂ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆಪ್‌ನಲ್ಲಿ ದೂರು ಸಲ್ಲಿಸಿ ಸ್ವೀಕೃತಿ/ ಡಿಜಿಟಲ್ ಇ-ಸ್ವೀಕೃತಿ ಫಡೆದುಕೊಳ್ಳಬೇಕು. ಕಳೆದುಕೊಂಡಿರುವ ಮೊಬೈಲ್ ನಂಬರ್‌ನ ನಕಲಿ ಸಿಮ್ ಕಾರ್ಡ್ ನ್ನೂ ಈ ಹಿಂದೆ ಸೇವೆ ಪಡೆಯುತ್ತಿದ್ದ ಸರ್ವಿಸ್ ಪ್ರೊವೈಡರ್‌ನಿಂದ(ಉದಾ: ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಇತ್ಯಾದಿ) ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಓಟಿಪಿ ಪಡೆಯಲು ಅದನ್ನು ಚಾಲನೆ ಮಾಡಿಟ್ಟುಕೊಳ್ಳಬೇಕು. ಅನಂತರ http://www.ceir.gov.in ವೆಬ್‌ಸೈಟ್‌ನಲ್ಲಿ ಕಳೆದುಕೊಂಡ ಮೊಬೈಲ್ ಫೋನ್‌ನ ಮಾಹಿತಿ ನಮೂದಿಸಬೇಕು.

ಮಾಹಿತಿ ನಮೂದಿಸಿದ 24 ಗಂಟೆಗಳೊಳಗೆ ಮೊಬೈಲ್‌ಫೋನ್ ಬ್ಲಾಕ್ ಆಗುತ್ತದೆ. ಒಂದು ವೇಳೆ ಮೊಬೈಲ್ ಫೋನ್ ಪತ್ತೆಯಾದರೆ CEIR ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅನ್‌ಬ್ಲಾಕ್ ಮಾಡಿ ಉಪಯೋಗಿಸಬಹುದು.

ಆಸ್ಪತ್ರೆ, ಶಾಲೆ, ಊರುಗಳಿರುವ ಡೀಮ್ಡ್ ಅರಣ್ಯ ಭೂಮಿಗೆ ಬದಲಿ ಜಾಗ ನೀಡಲು ಸಿದ್ಧ; ಜಿಲ್ಲಾಧಿಕಾರಿ ಕೆ ಎನ್ ರಮೇಶ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಮತ್ತು ಅಮೃತ್ ಮಹಲ್ ಜಾಗಗಳಲ್ಲಿ ಆಸ್ಪತ್ರೆ, ಶಾಲೆ, ಊರುಗಳೂ ಇವೆ. ಸರ್ಕಾರ ಒಪ್ಪುವುದಾದರೆ ಅದಕ್ಕೆ ಬದಲಿ ಜಾಗವನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಇದಕ್ಕಾಗಿ ಭೂಮಿಯನ್ನು ಗುರುತು ಮಾಡಿಟ್ಟುಕೊಂಡಿದ್ದೇವೆ. ಜನ ವಸತಿ ಪ್ರದೇಶಗಳಿರುವ ಡೀಮ್ಡ್ ಮತ್ತು ಅಮೃತ್ ಮಹಲ್ ಭೂಮಿಯ ಎರಡು ಪಟ್ಟು ಪ್ರಮಾಣದಷ್ಟು ಭೂಮಿಯನ್ನು ನಾವು ನೀಡಲು ತಯಾರಿದ್ದೇವೆ. ಇದಕ್ಕೆ ಬೇಕಿದ್ದರೆ ನಾವು ಪ್ರಸ್ತಾ ವನೆ ಕಳಿಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಡೀಮ್ಡ್ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರೂ ನೋಟಿಫಿಕೇಷನ್ ಮಾತ್ರ ಆಗಿದೆ. ಕಾಯ್ದೆ ಆಗಿಲ್ಲ. ನಮ್ಮ ಜಿಲ್ಲೆಯಲ್ಲಿ ೧.೪೧ ಲಕ್ಷ ಹೆಕ್ಟರ್ ಡೀಮ್ಡ್ ಫಾರೆಸ್ಟ್ ಎಂದು ಗುರಿತಿಸಲಾಗಿತ್ತು. ಇದೀಗ ಸರ್ಕಾರ ಅದನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ ನಂತರ ಅದರ ಪ್ರಮಾಣ ೫೧೯೦೦ ಹೆಕ್ಟರ್‌ಗೆ ಇಳಿದಿದೆ ಎಂದರು.

ಈಗ ಕೈಬಿಟ್ಟಿರುವ ಡೀಮ್ಡ್ ಜಮೀನನ್ನು ಅರಣ್ಯ ಇಲಾಖೆಯಿಂದ ಹಿಂದಕ್ಕೆ ಪಡೆಯಲು ಆ ಜಾಗವನ್ನು ಅವರಿಗೆ ಕೊಟ್ಟೇ ಇರಲಿಲ್ಲ. ಡೀಮ್ಡ್ ಎಂದು ಘೋಷಣೆ ಆಷ್ಟೇ ಆಗಿತ್ತು. ಈ ಕಾರಣಕ್ಕೆ ಗೊಂದಲ ಇತ್ತು. ಯಾವುದೇ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ತಕರಾರರು ಇದ್ದು, ಕಡತವನ್ನು ಅರಣ್ಯ ಇಲಾಖೆಗೆ ಕಳಿಸಿದಾಗ ಮಾತ್ರ ಡೀಮ್ಡ್ ಸಮಸ್ಯೆಯೂ ಅಡ್ಡ ಬರುತ್ತಿತ್ತು ಎಂದು ವಿವರಿಸಿದರು.

ಇದಲ್ಲದೆ ಮೀಸಲು ಅರಣ್ಯ ಎಂದು ಈ ಹಿಂದೆಯೇ ತೀರ್ಮಾನ ಆಗಿರುವ ಸಾಕಷ್ಟು ಜಮೀನು ಪಹಣಿಯಲ್ಲಿ ಇನ್ನೂ ಅರಣ್ಯ ಎಂದು ಬರುವುದಿಲ್ಲ. ಇಂತಹ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಂತಿಮ ಹಂತದಲ್ಲಿ ಈ ಜಾಗ ನಮ್ಮದು ಎಂದು ಹೇಳುವಾಗ ಮತ್ತೆ ಗೊಂದಲಕ್ಕೆ ಕಾರಣವಾಗುತ್ತಿದೆ. ಈ ಕಾರಣಕ್ಕೆ ಅರಣ್ಯದ ಗಡಿ ಗುರುತಿಸಿ ಪ್ರತ್ಯೇಕಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಮತ್ತೊಂದು ದುರ್ಘಟನೆ; ಒಂದೇ ಕುಟುಂಬದ ಮೂವರು ಸಾವು

ಜಿಲ್ಲೆಯಲ್ಲಿ ವಿವಿಧ ಯೋಜನೆ ಯಡಿ ಫಲಾನುಭವಿಗಳಿಗೆ ಮಂಜೂರಾದ ಜಮೀನಿಗೆ ಸಂಬಂಧಿಸಿದ ದಾಖಲೆಗ ಳನ್ನು ಜೆರಾಕ್ಸ್ ಹಾಗೂ ಸ್ಕ್ಯಾನ್ ಮಾಡಿಸಿ ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿಗಳಲ್ಲಿ ಇಡಲು ಕ್ರಮ ವಹಿಸಲಾಗಿದೆ. ಮುಂದೆ ಯಾರೂ ತಮ್ಮ ಕಡತ ನಾಪತ್ತೆಯಾಗಿದೆ ಎನ್ನುವ ದೂರು ಬರಬಾರದು. ಎಸಿ ಕಚೇರಿಯಲ್ಲಿ ಸಿಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಂತೂ ಸಿಗಲೇ ಬೇಕು. ಈ ಕೆಲಸ ಶೇ.೮೦ ರಷ್ಟು ಆಗಿದೆ. ಮಿಕ್ಕ ಶೇ. ೨೦ ರಷ್ಟನ್ನು ಸಧ್ಯದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಭೂಮಿ ಆರ್‌ಟಿಸಿ ಇಲಾಖಗೆ ಪತ್ರ ಬರೆದು ನಮ್ಮ ಜಿಲ್ಲೆಯಲ್ಲಿ ಆಶ್ರಯ ಯೋಜನೆಗೆ ಕೊಟ್ಟಿರುವ ಎಲ್ಲಾ ಸರ್ವೇ ನಂಬರ್ ಪಟ್ಟಿಯನ್ನು ತರಿಸಿಕೊಂಡಿದ್ದೇವೆ. ಇಲ್ಲಿಯವರೆಗೆ ಯಾರೂ ಈ ಕಾರ್ಯ ಮಾಡಿರಲಿಲ್ಲ. ಪಡಿಓ, ತಹಸೀಲ್ದಾರರಿಗೆ ಗೊತ್ತಿಲ್ಲದ ಮಾಹಿತಿ ಈಗ ನಮ್ಮ ಬಳಿ ಇದೆ ಎಂದರು.

ಈ ಎಲ್ಲಾ ಜಾಗವನ್ನು ಸರ್ವೇ ಮಾಡಿಸಿ ಭೂಮಿಯನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯ ಹಿಡಿ ಯುತ್ತದೆ ಎಂದು ತಿಳಿಸಿದರು. ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ ಸಂಬಂಧ ನಾವು ಬಂದ ಮೇಲೆ ೭ ಮಂದಿ ರೆವೆನ್ಯೂ ಇನ್ಸ್‌ಪೆಕ್ಟರ್ ಗಳನ್ನು ನಾವು ಜೈಲಿಗೆ ಕಳಿಸಿದ್ದೇವೆ. ಈ ಪೈಕಿ ಒಬ್ಬಾತನಿಗೆ ಇನ್ನೂ ಬಿಡುಗಡೆ ಆಗಿಲ್ಲ. ಹಿಂದೆ ಯಾರೂ ಈ ಕ್ರಮ ಕೈಗೊಂಡಿಲ್ಲ ಎಂದರು.

ಸುದ್ದಿ ಕೃಪೆ: ನ್ಯೂಸ್ ಕನ್ನಡ

Most Popular

Recent Comments